Wednesday, December 30, 2009

ಈ ನರ್ಸಮ್ಮ ಯಲ್ಲೋಗಿದರೋ......?




"ಅತ್ತೆ ಸತ್ತ ಆರು ತಿಂಗಳಿಗೆ ಸೊಸೆ ಕಣ್ಣಲ್ಲಿ ನೀರು" ಬಂತಂತೆ
ಈ ಗಾಧೆ ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿದೆ. ಅದು ಈಗಿನ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೊಳ್ಳುತ್ತೆ. ನೆರೆಯ ರಾಜ್ಯವಾದ ಆಂಧ್ರ ಪ್ರದೇಶದಲ್ಲಿ ಕಳೆದ 4-5 ತಿಂಗಳಿನಿಂದ ರಾಜ್ಯ ವಿಭಜನೆಯದೆ ಸುದ್ದಿ. ಮೊದಲು ಚಂದ್ರಶೇಖರ್ ನೇತ್ರತ್ವದಲ್ಲಿ ಪ್ರತ್ಯೇಕ ತೆಲಂಗಾಣಕ್ಕಾಗಿ ನಡೆದ ಹೋರಾಟ ದೊಡ್ಡ ಸುದ್ದಿ ಮಾಡಿತ್ತು. ಚಂದ್ರಶೇಖರ್ ಉಪವಾಸ ಮಾಡಿದ್ದರಿಂದ ಉಂಟಾದ ಕೋಲಾಹಲದಿಂದ ಪಾರಾಗಲು ಕೇಂದ್ರ ಸರಕಾರ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸುವ ಭರವಸೆ ನೀಡಿತ್ತು, ಮಾರನೆಯ ದಿನವೇ ಆಂಧ್ರದ ಒಕ್ಕೂಟಕ್ಕಾಗಿ ರಾಯಲಸಿಮಾ ಮತ್ತು ಆಂಧ್ರದ ಕರಾವಳಿ ಭಾಗದಲ್ಲಿ ಪ್ರತಿಭಟನೆಗಳು ಆರಂಭವಾದವು.
 ಒಕ್ಕೂಟ ರಾಜ್ಯದ ವಕ್ತಾರರು ಚಂದ್ರಶೇಖರ್ ನೇತ್ರತ್ವದಲ್ಲಿ ತೆಲಂಗಾಣಕ್ಕಾಗಿ ಪ್ರತಿಭಟನೆಗಳು ನಡೆಯುವಾಗ ಕನಿಷ್ಠ ಪ್ರಮಾಣದ ವಿರೋಧವನ್ನು ವ್ಯಕ್ತಪಡಿಸಿರಲಿಲ್ಲ. ಕೇಂದ್ರ ಸರ್ಕಾರ ತೆಲಂಗಾಣವನ್ನು ಪ್ರತ್ಯೇಕ ರಾಜ್ಯ ಘೋಶಷಣೆ ಮಾಡುತ್ತಿದ್ದ ಹಾಗೆ ನಿದ್ದೆಯಿಂದೆದ್ದರು. ಮತ್ತೆ ಜಿದ್ದಾಜಿದ್ದಿನ ಹೋರಾಟಗಳು, ಪ್ರತಿಷ್ಠೆಗಳು ಸಾಂಗವಾಗಿ ನಡೆದವು. ಇಕ್ಕಟ್ಟಿನಲ್ಲಿ ಸಿಲುಕಿದ್ದು ಮಾತ್ರ ಕೇಂದ್ರ ಸರಕಾರ, ತೊಂದರೆ ಅನುಭವಿಸಿದು ಜನ. ತೆಲಂಗಾಣ ಭಾಗದ ಸಚಿವರು ಕೂಡ ರಾಜೀನಾಮೆ ನೀಡಿ ಹೋರಾಟಕ್ಕೆ ಬೆಂಬಲಿಸಿದ್ದು ವಿಪರ್ಯಾಸ. ಅವರೇ ನಡೆಸುವ ಸರಕಾರ ಜನರ ಅಶೋತ್ತರಗಳಿಗೆ ಸ್ಪಂದಿಸಿಲ್ಲ ಎಂದು ಸಚಿವರು ನೇರವಾಗಿ ಒಪ್ಪಿಕೊಂಡ ಹಾಗೆ ಆಯಿತು.
ಇನ್ನು ಕರ್ನಾಟಕ ರಾಜ್ಯಕ್ಕೆ ಬಂದರೆ. ಇಲ್ಲಿಯೂ ಅಂತದೆ ಸೋಮಾರಿ ಜನಗಳಿದ್ದಾರೆ. ಪಾಪ 30 ವರ್ಷ ವಿರೋಧ ಪಕ್ಷದ ನಾಯಕನಾಗಿ ಗಂಟಲು ಹರಿದುಕೊಂಡು ಕುಮಾರ ಸ್ವಾಮಿ ದಯದಿಂದ ಅಪರೂಪಕ್ಕೆ ಅಧಿಕಾರ ಸಿಕ್ಕಿ ಮುಖ್ಯಮಂತ್ರಿಯಾದರೆ ನೆಮ್ಮದಿಯಾಗಿ ಮಜಾ ಮಾಡುವ ಹಾಗಿಲ್ಲ. ಒಂದೆಡೆ ರೆಡ್ಡಿಗಳು, ಇನೊಂದೆಡೆ  ಈಶ್ವರಪ್ಪ. ಇವರ್ನೆಲ್ಲಾ ತಪ್ಪಿಸಿಕೊಂಡು ಹೇಗೋ ಹೆಗುತ್ತಿದ್ದರೆ ಈ ರೇಣುಕ ಒಬ್ಬ ನನ್ದೆಲ್ಲಿಕ್ಕಲಿ ಅಂತ ಬರುತಾನೆ. ಹಾಳಾಗಿ ಹೋಗಲಿ ಅಂತ ಅವನಿಗೂ ಒಂದು ಸಚಿವ ಸ್ಥಾನ ಕೊಟ್ಟು ಕೈ ತೊಳೆದುಕೊಂಡರೆ. ಅದೆಲ್ಲಿದ್ದಲೋ ಈ ನರ್ಸಮ್ಮ ದುತ್ತೆಂದು ಕಾಣಿಸಿಕೊಂಡು ರೇಣುಕನನ್ನ ಕೈ ಬಿಡಿ ಎಂದು ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸ್ತೇನೆ ಅಂತ ಕುತವಳೇ. ಸದ್ಯಕ್ಕೆ ಯಡಿಯೋರಪ್ಪನವರ ಅದೃಷ್ಟ ಚನ್ನಾಗಿತು. ಕನ್ನಡದ ಮೇರು ನಟ ವಿಷ್ಣುವರ್ಧನ್ ನಿಧನರಾದರು ಜನರ ಗಮನವೆಲ್ಲ ಆ ಕಡೆ ಹೋಯಿತು ಇಲ್ಲವಾದರೆ ನರ್ಸಮ್ಮ ಬಿಜೆಪಿ ಸರ್ಕಾರದ ಮರ್ಯಾದೆಯನ್ನು ಮೂರೂ ಕಾಸಿಗೆ ಕಳಿತ್ತಿದ್ಲು. 
ಇದೆಲ್ಲ ಏನೇ ಇರ್ಲಿ ಜನ ಮಾತ್ರ ಅತ್ತೆ ಸತ್ತ ಆರು ತಿಂಗಳಿಗೆ ಸೊಸೆ ಕಣ್ಣಲ್ಲಿ ನೀರು ಬಂತು ಎಂಬ ಗಾಧೆಯಂತೆ ಎಲ್ಲ ಮುಗಿದಮೇಲೆ ಎದಿದ್ದಾರೆ. ರೇಣುಕನಿಗೆ ಸಚಿವ ಸ್ಥಾನ ನೀಡೋದು 4  ದಿನ ಮೊದಲೇ ಮುಖ್ಯಮಂತ್ರಿ ಖಚಿತಪಡಿಸಿದ್ರು, ಆಗಲೇ ಎದ್ದಿದರೆ ಇಷ್ಟೆಲ್ಲಾ ಪಜಿತಿಯೇ ಇರುತ್ತಿರಲಿಲ್ಲ. 
ನರ್ಸಮ್ಮ, ನಂದೀಶ್ ರೆಡ್ಡಿ, ವಿಶ್ವನಾಥ್ ಎಲ್ಲಾ ಯಲ್ಲೋಗಿದರೋ......?