ಕೃಷಿಮೇಳಗಳೆಂಬ ಪ್ಯಾಷನ್ ಶೋಗಳು...
ಉತ್ತರದಿಂದ ಬೀಸುತ್ತಿರುವ ಬಿಡುಗಾಳಿಗೆ ನಮ್ಮ ರೈತರ ಬದುಕು ತತ್ತರಿಸುತ್ತಿದೆ. ನೇಗಿಲು ಹಿಡಿದು ಹೋಲದೊಳು ಹಾಡಬೇಕಿದ್ದ ಉಳುವಾ ಯೋಗಿ ಕಣ್ಣಿರಿನಲ್ಲಿ ಕೈ ತೊಳೆಯುತ್ತಿದ್ದಾನೆ. ಆದರೆ, ನಮ್ಮ ಕೃಷಿ ವಿಶ್ವವಿದ್ಯಾಲಯಗಳು ಪ್ಯಾಷನ್ ಶೋಗಳನ್ನು ನಡೆಸುತ್ತಿವೆ ಎಂದರೆ ಬಹಳ ಮಂದಿಗೆ ಅಚ್ಚರಿಯಾಗಬಹುದು.
ವಿಶ್ವವಿದ್ಯಾಲಯಗಳು ನಿಜವಾಗಿಯೂ ‘ಜನತೆ’ಯಿಂದ ದೂರವಿರುತ್ತವೆ ಎಂಬುದಕ್ಕೆ ಉತ್ತಮ ಉದಾಹರಣೆ, ಬೆಂಗಳೂರು ಕೃಷಿ ವಿವಿಯ ಕೃಷಿ ಮೇಳ.
ಸರಿಸುಮಾರು ಒಂದು ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ಅದ್ದೂರಿ ಕೃಷಿ ಮೇಳ ನಡೆಯಿತು. 600ಕ್ಕೂ ಹೆಚ್ಚು ಕೃಷಿ ಸಂಬಂಧಿ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿತ್ತು. ಯತಾರೀತಿ ಕೃಷಿ ವಿವಿ ವಿದ್ಯಾರ್ಥಿಗಳು, ಸಂಶೋಧಕರ ಕೆಲ ಹೊಸ ತಳಿಗಳ ಪ್ರಾ ಇದ್ದವು. ಇಲ್ಲಿನ ಯಾವೋಂದು ಕೂಡ ಸಾಮಾನ್ಯ ರೈತರಿಗೆ ನಯಾಪೈಸೆ ಉಪಯಕ್ತವಾಗಲಿಲ್ಲ ಎಂದರೆ ನಿಮಗೆ ಖಂಡಿತ ದುಃಖವಾಗದಿರದು.
ಕಂಪೆನಿಗಳ ಬೀಜ ಮಾರಾಟಕಕ್ೆ ಕೃಷಿ ಮೇಳ!
ನೇರಾ-ನೇರ ನಾನು ಹೀಗೆ ಹೇಳ ಹೊರಟರೆ ಅಪಪ್ರಚಾರ ಮಾಡುವ ಸಲುವಾಗಿಯೇ ನಿಂತಂತೆ ಕಾಣಬಹುದು. ಆದರೂ, ಇದು ಸತ್ಯ. ಹಳ್ಳಿಗಾಡಿನ ಕೃಷಿಕ ಹಿನ್ನೆಲೆಯಿಂದ ಬಂದ ನನಗಂತೂ ಆತಂಕವಾಗಿದೆ. ಕೃಷಿ ಮೇಳಗಳು ಆತ್ಮಹತ್ಯೆ, ನೆರೆ-ಬರದ ಭೀಕರತೆಯಲ್ಲಿರುವ ರೈತನ ಬದುಕಿಗೆ ಹೊರ ಭರವಸೆ ಮೂಡಿಸಬೇಕಿತ್ತು. ಆದರೆ, ಕೃಷಿ ಮೇಳವನ್ನು ಒಂದು ದಿನವೀಡಿ ಸುತ್ತಿ ಬಂದರೂ, ಕೃಷಿ ಸಂಬಂಧಿ ಮಾಹಿತಿ ಕನಸಿನ ಮಾತಾಗಿತ್ತು. ಕೇವಲ ಹೈಬ್ರಿಡ್ ಬೀಜ, ಗೊಬ್ಬರ ಮಾರಾಟಕಕ್ೆ ಕೃಷಿಮೇಳ ವೇದಿಕೆಯನ್ನು ಒದಗಿಸುತ್ತಿರುವುದು ಗುಟಾ್ಟಗೇನು ಇರಲಿಲ್ಲ.
ದುಬಾರಿ ರೇಶ್ಮೆ ವಸ್ತ್ರಗಳು, ವಿದೇಶಿ ಬೀಜ ಕಂಪೆನಿಗಳ ಬೀಜ ಮತ್ತು ರಸಾಯನಿಕ ಔಷದ ಗೊಬ್ಬರ, ಬೆಲೆ ಸಿಗದೆ ಬೇಜಾರಾದರೆ ತಲೆಗೆ ಹೊಡೆದುಕೊಳ್ಳಲು ಹಗ್ಗದ ಬೆಲೆಯ ಚಪ್ಪಲಿಗಳು, ದುಡಿದು ದಣಿದ ಜೀವಕಕ್ೆ ‘ಬಿಡುಗಡೆ’ ನೀಡುವ ಸೋನಾ ಮಸಾಜ್ ಯಂತ್ರ, ಇನ್ನೂ ಬೇಸರವಾದರೆ ಕುಡಿಯಲು ಬಗೆ-ಬಗೆಯ ವೈನ್, ದೊಡ್ಡ ರೈತರಿಗೆ ಅಗತ್ಯವಿರುವ ಬೆಳೆ ಬಾಳುವ ಟಾ್ಯಕ್ಟರ್, ಡ್ರಿಫ್ ಇರಿಗೇಷನ್ ಸಾಮಾಗ್ರಿಗಳು.
ಜೊತೆಗೆ ನಮ್ಮ ಹಳ್ಳಿಗಾಡಿನ ಮಹಿಳೆಯರು ತಯಾರಿಸಿದ ಚಕಕ್ಲಿ, ಅಪ್ಪಳ, ಸಂಡಿಗೆ, ಹುರಿಗಡ್ಲೆ ಬೀಜ, ಇದೆಲ್ಲ ನೋಡಿಕೊಂಡು ಸ್ವಲ್ಪ ಮುಂದೆ ಸಾಗಿದರೆ ಕೊನೆಗೆ ರೈತ ಎಂದಿಗೂ ಕೊಳ್ಳಲು ಸಾಧ್ಯವಿಲ್ಲದ ಒಂದೇರಡು ಜೊತೆ ಹೋರಿಗಳು. ಅವುಗಳ ಪಕಕ್ದಲೆ ಮಾಂಸದ ಮೇಕೆ, ಕುರಿ, ಕೋಳಿಗಳು. ಇಂತಹ ಕೃಷಿ ಮೇಳಗಳು ಯಾವ ಘನಂದಾರಿ ಉದ್ದೇಶಗಳಿಗಾಗಿ ನಡೆಸಬೇಕು. ಕೃಷಿ ಮೇಳ ರಂಗೇರಿಸಲು ನಗರದ ಶಾಲಾ-ಕಾಲೇಜು ವಿದಾ್ಯರ್ಥಿಗಳಿಗೆ ಬಿಡುವ ನೀಡಿ ಸುತಾ್ತಡಿಸುವುದು ಒಳ್ಳೆಯದೆ. ಆದರೆ, ರೈತ ಏನು ಮಾಡಬೇಕು ಸಾ್ವಮೀ...
ಬೆಂಗಳೂರಿನ ಶಾಪಿಂಗ್ ಮಾಲ್ಗಳಿಗೆ ಹೋಗುವ ಮಂದಿಗೆ ಕೃಷಿ ಮೇಳ ಹೊಸ ಹುಮ್ಮಸ್ಸು ನೀಡುತ್ತವೆ. ಇದು ಓ.ಕೆ. ಆದರೆ, ರೈತನ ಹೆಸರಿನಲ್ಲಿ, ಅವನದೇ ಹಣದಲ್ಲಿ ಕೃಷಿ ಮೇಳ ಪಾ್ಯಷನ್ಗಾಗಿ ಮಾಡಬೇಕೇ? ಇದರಿಂದ ಗಾ್ರಮಾ್ಯ ಭರತದ ಕೃಷಿಕನಿಗೆ ನಯಾಪೈಸೆ ಉಪಯೋಗವಾಗುವುದಿಲ್ಲ.
ಹಳ್ಳಿಗಾಡಿನ ಜನತೆಗೆ ಕಡಿಮೆ ಮಳೆ ಬೀಳುವ ಒಣ ಭೂಮಿಯಲ್ಲಿ ಬೆಳೆಯ ಬಲ್ಲ ಹೊಸ ತಳಿಗಳು, ಕಣ್ಮರೆಯಾಗುತ್ತಿರುವ ನವಣೆ, ಆರ್ಕ, ಸಜ್ಜೆ, ರಾಗಿ, ಜೋಳ, ತೊಗರಿ, ಹೆಸರು, ಉದ್ದು, ಅವರೆ, ಉರುಳಿಯ ತಳಿ ಉಳಿಸಬೇಕು. ರೈತರಿಗೆ ಇಂತಹ ಅಪರೂಪದ ತಳಿಗಳ ಬೀಜದೊಂದಿಗೆ ಅಗತ್ಯ ಮಾರ್ಗದರ್ಶನ ದೊರೆಯಬೇಕು. ನಿಯಮದಂತೆ ಬೆಂಗಳೂರು- ಧಾರವಾಡ ಕೃಷಿ ವಿಶ್ವ ವಿದಾ್ಯಲಯಗಳ ಮಳಿಗೆಗಳನ್ನು ಹೊರತುಪಡಿಸಿದರೆ ಕೃಷಿ ಮೇಳದಲ್ಲಿ ಕೃಷಿಯ ಗಂಧವು ಗೋಚರಿಸಲಿಲ್ಲ. ಎತ್ತು, ಕತ್ತೆ, ನಾಯಿಗಳ ಪಾ್ಯಷನ್ ಶೋ ನಡೆಸಲಿಕಕ್ೆ ಕೃಷಿ ಮೇಳಗಳು ಯಾರಿಗೆ? ಅದು ರೈತರ ಹಣದಲ್ಲಿ ಮೇಳಗಳು ನಡೆಸಬೇಕೇ ಎಂಬ ಪ್ರಶ್ನೆಗಳನ್ನು ಕೃಷಿ ವಿವಿಗಳ ಪಂಡಿತರಿಗೆ ಕೇಳಬೇಡವೇ....
ಕೃಷಿ ರೋಗಗ್ರಸ್ಥ ಉದ್ದಿಮೆ...
ಕೃಷಿ ಮೇಳ ಉದಾ್ಘಟನೆಗೆ ಬಾರಿ ಉತ್ಸಹದಲ್ಲಿ ಧಾವಿಸಿದ್ದ ನಮ್ಮ ಸಚಿವ ಎಸ್.ಎ.ರವೀಂದ್ರನಾಥ್ಗೆ ರಾಜ್ಯಪಾಲ ಎಚ್.ಆರ್.ಭರದಾ್ವಜ್ ಜಾಡಿಸಿದ್ದು, ಮಾತ್ರ ಮುಟ್ಟಿನೋಡಿಕೊಳ್ಳುವಂತಿತ್ತು. ಬಾ್ಯಟರಾಯನಪುರದ ಶಾಸಕ ಕೃಷ್ಣಬೈರೇಗೌಡ ಕೂಡ ಕೃಷಿ ಸಚಿವ ಮತ್ತು ರಾಜ್ಯ ಸರಕಾರಕಕ್ೆ ಕೆಕಕ್ಮಕಕ್ ಉಗಿದು ಉಪಾ್ಪಕಕ್ಿದ್ದು, ನೆರೆದ ರೈತರಿಗೆ ಸಂತಸ ಕೊಟ್ಟಿದ್ದು, ರವೀಂದ್ರನಾಥ್ಗೆ ತಟ್ಟಲಿಲ್ಲ. ಅಧಿಕಾರ ಮತ್ತು ಹಣದ ಥೈಲಿಗಿಳಿದಿರುವ ರವೀಂದ್ರನಾಥ್ಗೆ ಸೂಕ್ಷ್ಮಗಳಿದ್ದಿದ್ದರೆ ರಾಜ್ಯದಲ್ಲಿ ರಸಗೊಬ್ಬರಕಾಕ್ಗಿ ರೈತರು ಬೀದಿಗಿಳಿಯುತ್ತಿರಲಿಲ್ಲ.
ಕೃಷಿ ಇಂದು ರೋಗಗ್ರಸ್ಥ ಉದ್ಧಿಮೆ ಎಂದೇ ಸರಕಾರಗಳು ಪರಿಗಣಿಸಿವೆ. ಈ ಹಿನ್ನೆಲೆಯಲ್ಲಿಯೇ ಅತ್ಯಂತ ನಿರ್ಲಕ್ಷಕಕ್ೆ ರೈತರು ಗುರಿಯಾಗಿದಾ್ದರೆ. ಯಾರಿಗೂ ಬೇಡದ ಕೃಷಿಕ ಅನಾಥನ ಸ್ಥಿತಿಯಲ್ಲಿ ಜೀವ ಹಿಡಿದುಕೊಂಡಿದಾ್ದನೆ. ರಾಜ್ಯ 17 ಪ್ರಗತಿಪರ ಕೃಷಿಕರಿಗೆ ಇದೇ ಕೃಷಿ ಮೇಳದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರೆ, ಈ ಸಮಾರಂಭಕಕ್ೆ ಆಗಮಿಸಬೇಕಿದ್ದ ಯಡಿಯೂರಪ್ಪ ಸಂಘ ಪರಿವಾರದ ಸರಸಂಚಾಲಕ ಮೋಹನ್ ಭಗವತ್ರನ್ನು ಭೇಟಿ ಮಾಡಲು ಚಡ್ಡಿ ಹಾಡಿಕೊಂಡು ತೆರಳಿದ್ದರು. ಪ್ರಶಸ್ತಿ ಸ್ವೀಕರಿಸಿ ರೈತನೊಬ್ಬ ಮುಖ್ಯಮಂತ್ರಿಗಳಿಗೆ ತಾರಾಮಾರ ಬೈಯುತ್ತಿದ್ದರೆ ಕೃಷಿ ವಿವಿಯ ಕುಲಪತಿ ಡಾ.ಚಂಗಪ್ಪ ಕರ್ಚಿಫ್ ತೆಗೆದುಕೊಂಡು ಮುಖದ ಮೇಲಿನ ನೀರು ಒರೆಸಿಕೊಳ್ಳುತ್ತಿದ್ದರು.
‘ನಮ್ಮ ಭತ್ತ, ರಾಗಿಯ ತಿಂದ..ಕತ್ತೆ ಸೊ...ಮಗ ಎಲ್ಲವನೆಲ್ಲವನೇ’ ಎಂಬ ರೈತಗೀತೆಯ ಧ್ವನಿ ಇಂತಹ ರೈತ ವಿರೋಧಿ ಮೇಳಗಳ ವಿರುದ್ಧ ಮೊಳಗಬೇಡವೇ... ಕೃಷಿ ವಿವಿಗಳು ಹೀಗೆ ಮುಂದುವರಿದರೆ ಕಾಯಿಕೊರಕಗಳಂತೆ ರೈತರ ಜೀವ ಹಿಂಡುವ ಜನರನ್ನು ಯಾರು ನಿಯಂತ್ರಿಸಬೇಕು.
ರಾಮಜೋಗಿಹಳ್ಳಿ ಪ್ರಕಾಶ್