Friday, August 28, 2009

ಕದ್ದ ಹಾಸ್ಯದ ತುಣುಕುಗಳು


ಟಿವಿಎಸ್‌ನಲ್ಲಿ ಬಂದೆ, ಹಾಯ್ ಅಂದಳು.
ಪಲ್ಸರ್‌ನಲ್ಲಿ ಬಂದೆ, ಹಲೋ ಅಂದಳು.
ಕಾರ್‌ನಲ್ಲಿ ಬಂದೆ, ಡಾರ್ಲಿಂಗ್ ಅಂದಳು.
ಇದೆಲ್ಲ ಬಾಡಿಗೆದ್ದು ಅಂದೆ, ಹೌದಾ ಅಣ್ಣಾ ಅಂದಳು..!


ಹುಂಜ ಮತ್ತು ಹೇಂಟೆಯ ನಡುವೆ ನಡೆದ ಪ್ರೇಮಪೂರಿತ ಸಂಭಾಷಣೆಯಿದು. ನೀವೂ ಓದಿ ತಿಳಿದುಕೊಳ್ಳಿ.
ಹುಂಜ: ನಾನು ನಿನ್ನ ಪ್ರೀತಿಸ್ತಿದ್ದೀನಿ.. ನಿಂಗೋಸ್ಕರ ಏನ್ ಬೇಕಾದ್ರೂ ಮಾಡ್ತೀನಿ.
ಹೇಂಟೆ: ನಿಜವಾಗಿಯೂ ನಾನು ಏನು ಹೇಳಿದ್ರೂ ಮಾಡ್ತೀಯಾ?
ಹುಂಜ: ಹೌದು ಡಾರ್ಲಿಂಗ್.. ಏನು ಮಾಡ್ಬೇಕು ಹೇಳು?
ಹೇಂಟೆ: ಹಾಗಿದ್ರೆ ಒಂದು ಮೊಟ್ಟೆ ಇಡು ನೋಡೋಣ..!

ವಿಮಾನದಲ್ಲಿದ್ದ ಸೆಕ್ಸೀ ಗಗನಸಖಿಯನ್ನು ನೋಡಿದ ಯುವಕನೊಬ್ಬ...
ಯುವಕ: ನಿಮ್ಮ ಹೆಸರೇನು?
ಗಗನಸಖಿ: ಮಿಸ್ ಬೆಂಜ್
ಯುವಕ: ಲವ್ಲೀ ನೇಮ್.. ಮರ್ಸಿಡೆಸ್ ಬೆಂಜ್‌ಗೂ ನಿಂಗೂ ಸಂಬಂಧ ಇದ್ಯಾ?
ಗಗನಸಖಿ: ಬರೀ ರೇಟು ಮಾತ್ರ..!

ಟೀಚರ್: ಲವ್ ಮಾಡಿ ಮದುವೆ ಆಗೋದು ಒಳ್ಳೇದೋ ಅಥವಾ ಮದುವೆಯಾಗಿ ಲವ್ ಮಾಡೋದು ಒಳ್ಳೇದೋ?
ಗುಂಡ: ಮದುವೆ ಆದಮೇಲೆ ಲವ್ ಮಾಡೋದೇ ಒಳ್ಳೇದು ಮೇಡಂ. ಆದ್ರೆ ಹೆಂಡತಿಗೆ ಗೊತ್ತಾಗ್ಬಾರ್ದು ಅಷ್ಟೇ..!

ಇದೊಂದು ವಿಚಿತ್ರ ಪ್ರಶ್ನೆ. ನೀವು ತೀರಾ ಬುದ್ಧಿವಂತರಾಗಿದ್ರೆ ಮಾತ್ರ ಪೂರ್ತಿ ಓದಿ.
ಬಾಲಿವುಡ್‌ನಲ್ಲಿ ಬಾಯ್‌ಫ್ರೆಂಡೇ ಇಲ್ಲದೇ ಇರೋ ನಾಯಕಿ ಯಾರು?
- ಕೋಯಿ ನಾ ಮಿತ್ರ..!

ದೇವರ ಹುಂಡಿಗೆ 1 ರೂಪಾಯಿ ಹಾಕಿ, 'ದೇವರೇ.. ನನಗೆ ಒಳ್ಳೆ ಫ್ರೆಂಡ್ ಕೊಡಪ್ಪ' ಅಂತ ಕೇಳಿದೆ.
ಅದಕ್ಕೆ ದೇವರು ನಿನ್ನನ್ನು ತೋರಿಸಿ ಹೇಳಿದ್ರು, 'ಮಗು.. 1 ರೂಪಾಯಿಗೆ ಇದಕ್ಕಿಂತ ಒಳ್ಳೆ ಫ್ರೆಂಡ್ ಸಿಗಲ್ಲ' ಅಂದ..!


ಹೆಂಡತಿ: ಶಹಜಹಾನ್ ತನ್ನ ಹೆಂಡತಿಯ ಮೇಲಿನ ಪ್ರೀತಿಗಾಗಿ ತಾಜ್‌ಮಹಲ್ ಕಟ್ಟಿದ. ನಾನು ಸತ್ರೆ ನೀವೇನು ಕಟ್ತೀರಾ?
ಗಂಡ: ತಾಳಿ.. ನಿನ್ನ ತಂಗಿಯ ಕುತ್ತಿಗೆಗೆ..

ನಿನ್ನೆ ರಾತ್ರಿ ಏಳು ದೆವ್ವಗಳು ನನ್ನ ಬಳಿ ಬಂದಿದ್ವು. ನಿಮ್ಮ ದಾರಿ ತಪ್ಪಿದೆ,
ಅತಿ ಬುದ್ಧಿವಂತ ನಾನನ್ನಲ್ಲ ಎಂದು ನಾನು ನಿನ್ನ ಅಡ್ರೆಸ್ ಕೊಟ್ಟೆ.
ಮೂರ್ಖ ದೆವ್ವಗಳು ಅದನ್ನು ನಂಬಿ ನನ್ನನ್ನು ಬಿಟ್ಟವು..!


ಹುಡುಗಿ: ಒಂದೇ ಒಂದು ಮುತ್ತು ಕೊಟ್ಟರೆ ಸಾಕು.. ನಾನೆಂದೂ ನಿನ್ನವಳಾಗಿರುತ್ತೇನೆ.
ಹುಡುಗ: ಮೊದಲೇ ಹೇಳಿದ್ದಕ್ಕೆ ತುಂಬಾ ಥ್ಯಾಂಕ್ಸ್..!

ಸಂತಾ ಮತ್ತು ಆತನ ಹೆಂಡತಿ ನಗ್ನ ಕಲಾ ಪ್ರದರ್ಶನ ವೀಕ್ಷಣೆಗೆ ಹೋಗಿದ್ದರು. ಅಲ್ಲಿ ತನ್ನ ಹೆಂಡತಿಯ ಚಿತ್ರವನ್ನು ನೋಡಿ ಪ್ರಶ್ನಿಸಲಾರಂಭಿಸಿದ.
ಸಂತಾ: ನಿಜಕ್ಕೂ ಚಿತ್ರ ಬಿಡಿಸಲು ನೀನು ಪೋಸ್ ಕೊಟ್ಟಿದ್ಯಾ?
ಹೆಂಡತಿ: ನಿಂಗೇನು ಹುಚ್ಚು ಹಿಡಿದಿದ್ಯಾ? ಚಿತ್ರ ಬಿಡಿಸೋನು ತನ್ನ ಶುದ್ಧ ಸ್ಮರಣ ಶಕ್ತಿಯಿಂದ ಬಿಡಿಸಿದ್ದಾನೆ.. ಅಷ್ಟೇ..!

ಅವಳಿಗೆ ನಾನು ದಿನಾ ಮೆಸೇಜ್ ಕಳುಹಿಸುತ್ತಿದ್ದೆ.
ನೀ ಸುಂದರವೆಂದು, ನೀ ನನ್ನ ಉಸಿರೆಂದು,
ನೀ ನನ್ನ ಜೀವವೆಂದು, ನೀ ನನ್ನ ಜೀವನವೆಂದು,
ನೀ ನನ್ನ ಬದುಕೆಂದು, ನೀನೇ ಎಲ್ಲವೆಂದು..
ಅವಳು ರಿಪ್ಲೈ ಮಾಡಿದಳು..
ಅಣ್ಣ ನಿಮಗೆ ಎಸ್‌ಎಂಎಸ್ ಫ್ರೀನಾ ಎಂದು..!

Thursday, August 27, 2009

ಎಲ್ ಟಿ ಟಿ ಇ ಪ್ರಭಾಕರನ್ ಪಕ್ಕದಲ್ಲಿ ಯಡಿಯೂರಪ್ಪ
ಪ್ರತ್ಯೇಕ ತಮಿಳುರಾಷ್ಟ್ರಕ್ಕಾಗಿ ಹೋರಾಟ ನಡೆಸಿ, ಶ್ರೀಲಂಕಾ ಸೇನಾ ಕಾರ್ಯಚರಣೆಯಲ್ಲಿ ಮೃತಪಟ್ಟರೆಂದು ಹೇಳಲಾದ ಎಲ್‌ಟಿಟಿಇ ನಾಯಕ ಪ್ರಭಾಕರನ್‌ ಭಾವಚಿತ್ರದೊಂದಿಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನ ಭಾವಚಿತ್ರವನ್ನು ಮುದ್ರಿಸಿರುವ ಬ್ಯಾನರ್ ವೊಂದು ಇತ್ತೀಚೆಗೆ ನಡೆದ ತಿರುವಳ್ವರ್ ಪ್ರತಿಮೆ ಅನಾವರಣದಲ್ಲಿ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮ ನಡೆಯುತ್ತಿದ್ದ ಬೆಂಗಳೂರಿನ ಹಲಸೂರು ಕೆರೆ ಸಮೀಪದ ಮೈದಾನದಿಂದ ಸ್ವಲ್ಪದೂರದಲ್ಲಿನ ಲಾವಣ್ಯ ಥಿಯೆಟರ್ ಬಳಿ ಮರವೊಂದಕ್ಕೆ ಕಟ್ಟಲಾಗಿದ್ದ ಪ್ಲೆಕ್ಷ್ ನಿಂದ ತಯಾರಿಸಿದ ಈ ಬ್ಯಾನರ್ ನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕ್ ರ್, ತಮಿಳುನಾಡಿನ ದಾರ್ಶನಿಕ ಪೆರಿಯಾರ್‌, ಸ್ವಾತಂತ್ರ ಸೇನಾನಿ ಶುಭಾಷ್‌ ಚಂದ್ರಬೋಸ್‌, ಕ್ಯೂಬಾ ಕಾಂತ್ರಿಯ ನೇತಾರ ಚೆ-ಗುವಾರ, ಎಲ್‌ಟಿಟಿಇ ನಾಯಕ ವೇಟ್ಟು ಪಿಳೈಪ್ರಭಕರನ್‌ರ ಭಾವಚಿತ್ರಗಳನ್ನು ಮೊದಲ ಸಾಲಿನಲ್ಲಿ ಹಾಕಲಾಗಿತ್ತು. ಕೆಳಗಿನ ಸಾಲಿನಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಖ್ಯಾತನಟ ಎಂ.ಜಿ.ರಾಮಚಂದ್ರನ್‌ರ ಭಾವಚಿತ್ರದ ಪಕ್ಕ ಕರ್ನಾಟಕದ ಮುಖ್ಯಮಂತಾರಿ ಯಡಿಯೂರಪ್ಪನವರ ಫೋಟೋವನ್ನು ಮುದ್ರಿಸಲಾಗಿತ್ತು.
ಬ್ಯಾನರ್ ನಲ್ಲಿ ಜನಶಕ್ತಿ ಎಂಬ ತಲೆಬರಹವಿದ್ದು ಮಾತ್ರವಿದ್ದು ಯಾವುದೇ ಸಂಘಟನೆಯ ಹೆಸರು ಇರಲಿಲ್ಲ. ಕೆಳಗೆ ‘ಭಾಷೆ, ಜಾತಿ, ಮತ ಭಾವನೆಯಿಲ್ಲದೆ ತಾನು ಭಾರತೀಯನೆಂದು ನಿರೂಪಿಸಿದ ಭಾರತೀಯ !! ಮಾನ್ಯ ಶ್ರೀ ಯಡಿಯೂರಪ್ಪನವರಿಗೆ ವಿಶ್ವದ ತಮಿಳು ಜನಾಂಗದ ಹಾರ್ಧಿಕ ಅಭಿನಂದನೆಗಳು’ ಎಂದು ಪ್ರಶಂಸಿಸಲಾಗಿತ್ತು.
ನೆರೆಯ ಶ್ರೀಲಂಕ ಸರಕಾರದಿಂದ ಘೋಷಿತ ಅಪರಾಧಿಯಾಗಿ ಸೇನಾ ಕಾರ್ಯಚರಣೆಯಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲಾದ ಪ್ರಭಾಕರನ್‌ ಭಾವಚಿತ್ರದ ಕೆಳಗೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪ್ರಶಂಸಿಸಲಾಗಿದೆ. ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸುವ ಮಾರ್ಗದಲ್ಲಿಯೇ ಈ ಬ್ಯಾನರ್ ಕಟ್ಟಲಾಗಿತ್ತು. ಸಮೀಪದಲ್ಲೇ ಪೊಲೀಸ್‌ ಅಧಿಕಾರಿಗಳು ಬಂದೋಬಸ್ತಗೆ ನಿಂತಿದ್ದರು.
ಕಲ್ಪನೆ ಕಳೆದುಕೊಂಡವ


ನಾನೊಂದು ಕವಿತೆ ರಚಿಸಬಲ್ಲೆ

ಕವಿತೆಗೆ ಸ್ಪೀರ್ತಿಯಾಗುವವಳು ಇಲ್ಲದೆ

ಕವಿತೆಗೆ ಸಾಲುಗಳು ಹೇಗೆ ಇರಬಲ್ಲವು.......

ಮಳೆತರದ ಮೋಡಗಳಂತೆ,

ಕಣ್ಣಿಲ್ಲದವನ ಮುಂದಿನ ಕನ್ನಡಿಯಂತೆ,

ಕಲ್ಪನೆ ಕಳೆದುಕೊಂಡ ಕವಿಯಂತೆ.......