Sunday, September 6, 2009

ಸ್ಟಂಟ್ ಗಳ ಮ್ಯಾನ್ ಟೋನಿ-ಜಾ

ಜಾಕಿಚಾನ್ ನಂತರ ಈಗಿನ ಮಟ್ಟಿಗೆ ನಿಜವಾದ ಸ್ಟಂಟ್ ಗಳ ಮ್ಯಾನ್ ಟೋನಿ-ಜಾ

ಹೆಣ್ಣು ಅಬಲೆಯಲ್ಲ ಸ್ವಾಮೀ

ಯಾರು ಹೇಳಿದ್ದು ಹೆಣ್ಣು ಅಬಲೆಯೆಂದು, ವಿಡಿಯೊ ನೋಡಿ ನಂತರ ಹೇಳಿ ಸ್ವಾಮಿ.



ಪಾಪ ಆಯಮ್ಮನ ಕೈಗೆ ಸಿಕ್ಕವನನ್ನು ನೋಡಿ, ಹೇಗೆ ಹಣ್ಣುಗಾಯಿ-ನೀರುಗಾಯಾಗಿದ್ದಾನೆ.




ಹೋಗಲಿ ಬಿಡಿ, ಇನ್ನು ಹೆಣ್ಣು ಮಕ್ಕಳಾದರು ಒಳ್ಳೆ ಫೆಂಡ್ಸ್ ರೀಟಿ ಇರ್ತಾರೆ ಅನ್ಕೊಂಡೇರೆ, ಇಲ್ನೋಡಿ. ಪಾಪ ಬಿಡಿಸಲು ಮಧೇ ಹೋದವನ ಹೇಗೆ ಜಜ್ಜಿ ಹೋಗಿದೆ.

ಅಬ್ಬಬ್ಬಾ ಕಷ್ಟ ಕಣ್ರಿ

Friday, September 4, 2009

ಖಾಸಗಿ ಆಸ್ಪತ್ರೆಗಳ ಗುಲಾಮರಾಗಿರುವ ಆರೋಗ್ಯ ಇಲಾಖೆ ಅಧಿಕಾರಿಗಳು

ರಾಜ್ಯದಲ್ಲಿ ಒಂದೆಡೆ ಹಂದಿಜ್ವರದಿಂದ ಜನ ಸಾಯುತ್ತಿದ್ದರೆ, ಮತ್ತೊಂಡೆದೆ ರಾಜ್ಯ ಸರಕಾರ ರೋಗಿಗಳ ಹಿತರಕ್ಷಣೆಗೆ ಬದಲಿಗೆ ಖಾಸಗಿ ಆಸ್ಪತ್ರೆಗಳ ಹಿತಾರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ಮಾರಕ ಜ್ವರದಿಂದ ಚೇತರಿಸಿಕೊಳ್ಳದೆ ಸತ್ತವರ ಸಂಖ್ಯೆ ರಾಜ್ಯದಲ್ಲಿ 40 ಗಡಿದಾಟಿದೆ. ಬೆಂಗಳೂರೊಂದರಲ್ಲೇ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಖಾಸಗಿ ಆಸ್ಪತ್ರೆಗಳು ಹಣದಾಸೆಗೆ ಜನರ ಪ್ರಾಣ ತೆಗೆಯುತ್ತಿವೆ. ಬಹಳಷ್ಟು ಆಸ್ಪತ್ರೆಗಳಿಗೆ ಎಚ್‌1ಎನ್‌1 ಪರೀಕ್ಷೆ ನಡೆಸುವುದೇ ಗೊತ್ತಿಲ್ಲ. ಆದರೂ, ಜ್ವರದಿಂದ ರೋಗಿಗಳ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳ ಬೆಡ್‌ ತುಂಬುತ್ತವೆ ಎಂಬ ಕಾರಣಕ್ಕೆ ಸರಕಾರದೊಂದಿಗೆ ಎಂ.ಒ.ಯು ಮಾಡಿಕೊಂಡು, ಚಿಕಿತ್ಸೆ ನೀಡುಲು ಮುಂದಾಗಿದೆ. ಪರೀಕ್ಷೆ ಮಾಡುವುದೇ ಗೊತ್ತಿಲ್ಲದ ಆಸ್ಪತ್ರೆಗಳು ಇನ್ನು  ಪ್ರಾಣವನ್ನು ಉಳಿಸುವುದೇಷ್ಟು ಎಂಬುದನ್ನು ಊಹಿಸಬಹುದು. ರೋಗದ ಬಗ್ಗೆ  ಪ್ರಾಥಮಿಕ ಮಾಹಿತಿಯೂ ಇಲ್ಲದ ವೈದ್ಯರು ರೋಗಿಯ ಬಾಯಿಗೆ ಟ್ಯಾಮಿಫ್ಲ್ಯೊ ಮಾತ್ರೆಗಳನ್ನು ತುರುಕಿ ಇದೇ ಚಿಕಿತ್ಸೆ ಎಂದು ಹಣ ವಸೂಲಿ ಮಾಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸೋಂಕನ್ನು ಗುರುತಿಸದೇ, ಸೂಕ್ತ ಚಿಕಿತ್ಸೆ ನೀಡದಿರುವುದರಿಂದ ಹಂದಿಜ್ವರ ಉಲ್ಬಣಗೊಂಡು ರೋಗಿಯ ಸ್ಥಿತಿ ಚಿಂತಾಜನಕವಾದಾಗ ಪ್ರತಿಷ್ಠಿತ ಎಂದು ಗುರುತಿಸಿಕೊಂಡಿರುವ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಆ ವೇಳೆಗೆ ಎಕ್‌‌ಸಪೈರಿ ಡೆಡ್‌ ಹತ್ತಿರವಾಗಿ ರೋಗಿ ಸಾವನ್ನಪ್ಪುತ್ತಾನೆ.
ಹೆಚ್ಚು ರೋಗಿಗಳು ಸತ್ತೆಗೆ ಆಸ್ಪತ್ರೆಗಳ ಹೆಸರು ಕೆಟ್ಟು ಆದಾಯಕ್ಕೆ ಖೋತಾ ಆಗಬಹುದೆಂಬ ಆತಂಕದಿಂದ ರೋಗಿಗಳ ಸಾವಿನ ಸಂಖ್ಯೆನ್ನು ಮುಚ್ಚಿಟಲು ಯತ್ನಿಸಲಾಗುತ್ತದೆ. ಇದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗೋಣೆ ಬಸವನ ಹಾಗೇ ತಲೆ ಆಡಿಸುತ್ತಿದ್ದಾರೆ, ಅದು ಪುಗಸಟ್ಟೆ ಅಲ್ಲ ಎಂಬ ಕುಹಕಕ್ಕೆ, ಸಂಬಂಧಿಸಿದವರೆ ಉತ್ತರ ಹೇಳಬೇಕು.
ರೋಗಿಗಳ ಸಂಖ್ಯೆ ಐದುನೂರರ ಗಡಿದಾಟಿದ್ದರೂ ಗುಣಮಟ್ಟದ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿಲ್ಲ. ಈಗಾಗಲೇ 83 ಆಸ್ಪತ್ರೆಗಳನ್ನು ಗುರುತಿಸಲಾಗಿದ್ದರೂ ಅವುಗಳಲ್ಲಿ ಕೆಲವು ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂಜೆರಿಯುತ್ತಿವೆ. ಚಿಕಿತ್ಸೆಗಾಗಿ ಹೋಗುವ ರೋಗಿಗಳನ್ನು ಎ ಮತ್ತು ಬಿ ಕ್ಯಾಟಗರಿ ಎಂದು ತೀರ್ಮಾನಿಸಿ ಟ್ಯಾಮಿಫ್ಲ್ಯೊ ಔಷಧ ನೀಡಿ ಮನೆಗೆ ಕಳುಹಿಸುತ್ತಿವೆ. ಮಾತ್ರೆಗಳನ್ನು ಸೇವಿಸಿ ಸಾರ್ವಜನಿಕವಾಗಿ ತಿರುಗಾಟುವ ರೋಗಿಗಳಿಂದ ಸೋಂಕು ಇನ್ನಷ್ಟು ವೇಗವಾಗಿ ಹಬ್ಬುತ್ತಿದೆ.
ಇನ್ನು ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಂಡರೂ ಹಣ ಸುಲಿಗೆ ಮಾಡುಲಿಕ್ಕಾಗಿ ಚಿಕಿತ್ಸೆಯನ್ನು ಮೆಗಾಸಿರಿಯಲ್‌ ರೀತಿ ಎಳೆದು ರೋಗಿಯನ್ನು ಸಾಯಿಸುತ್ತಿವೆ. ಪರೀಕ್ಷಾ ಕಿಟ್‌ಗೆ ತಗಲುವ 2 ಸಾವಿರ ರೂಪಾಯಿ ವೆಚ್ಚವನ್ನು ಭರಿಸುವುದಾಗಿ ಸರಕಾರ ಹೇಳಿದೆಯಾದರೂ ಅದನ್ನು ಕೆಲವು ಆಸ್ಪತ್ರೆಗಳು ರೋಗಿಗಳಿಂದಲೇ ವಸೂಲಿ ಮಾಡುತ್ತಿವೆ. ಸರಕಾರದಿಂದ ಹಣ ಬಂದಾಗ ನೀವೆ ತೆಗೆದುಕೊಳ್ಳಿ ಎಂಬ ಕಾರಣವನ್ನು ಆಸ್ಪತ್ರೆಯ ವೈದ್ಯರು ಹೇಳುತ್ತಿದ್ದಾರೆ. ಇದರಿಂದಾಗಿ ಸರಕಾರ ಆರ್ಥಿಕ ನೆರವು ನೀಡುತ್ತಿದ್ದರೂ ಅದು ಬಡರೋಗಿಗಳಿಗೆ ತಲುಪುತ್ತಿಲ್ಲ.
ಇಂತಹ ಆಸ್ಪತ್ರೆಗಳ ವಿರುದ್ಧ ದೂರು ನೀಡಿದ್ದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬದಲಿಗೆ ದೂರು ನೀಡಿದವರಿಗೆ ಆಸ್ಪತ್ರೆಗಳಿಂದ ಹಣ ಕೊಡಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಉಳಿದ ಸಾಮಾನ್ಯ ರೋಗಿಗಳು ಈ ಸಮಸ್ಯೆಯನ್ನು ನಿರಂತರವಾಗಿ ಅನುಭವಿಸುತ್ತಲೇ ಇದ್ದಾರೆ.

Thursday, September 3, 2009

ಅಧುನಿಕ ರಾವಣ

ಪಾಪ ತ್ರೇತಾಯುಗದ ರಾವಣನ ಸೃಷ್ಠಿ ಮಾಡುವಾಗ ಬ್ರಹ್ಮನಿಗೆ ಟೈಮ್ಇರಲ್ಲಿಲ್ಲವೆನೋ ಅದಕ್ಕಾಗಿ 10 ಕೈ, 10 ತಲೆಗೆ ಸುತ್ತಾಗಿಬಿಟ್ಟಿದ್ದಾನೆ.
ಆದರೆ ಆಧುನಿಕ ಬ್ರಹ್ಮರಿಗೆ ಸಾಕಷ್ಟು ಸಮಯವಿದ್ದಂತಿದೆ, ಇಲ್ನೋಡಿ ವ್ಯಕ್ತಿಗೆ ಎಷ್ಟು ಎಷ್ಟೊಂದು ಕೈಗಳನ್ನು ಸೃಷ್ಟಿಸಿದ್ದಾರೆ.
ಕಂಪ್ಯೂಟರ್ ಕರಾಮತ್ತು ಏನೆಲ್ಲಾ ಮಾಡುತ್ತೆ ಮಾರಾಯ್ರೇ

ನಮಗೂ ಇಷ್ಟೊಂದು ಕೈಗಳಿದಿದ್ದರೆ, ಜೊತೆಗೆ ಸೂರ್ಯಮುಳುಗದೆ ಇದ್ದರೆ........
ಈಗಾಗಲೇ ಮನುಷ್ಯರಿಗೆ ಮನೆ ಹಾಳು ಮಾಡುವ ಬುದ್ದಿ ಬಂದಿದೆ. ಅಷ್ಟು ಕೈಗಳ್ಳಿದರೆ ಕಲ್ಪನೆಯೇ ಅಸಾಧ್ಯ ಬಿಟ್ಟಾಕಿ.
ಈಗ ಇವನ ಜೋತೆ ಹೊಡೆದಾಟಕ್ಕೆ ಹೋಗುವ ತಾಕತ್ತು ಇದೆಯಾ ಮೊದಲು ಅದನ್ನೇಳ್ಳಿ
............?

ಮದುವೆಯಲ್ಲಿ ಮಾಜಾ ತರುವ ಘಟನೆಗಳು

ಹುಚ್ಚನ ಸಾವು


ಕನ್ನಡದ ಯಾವುದೋ ಒಂದು ಚಿತ್ರದಲ್ಲಿ ಶ್ರೀಮಂತ ನಾಯಕ ಕಾರ್ಮಿಕರನ್ನು ಕುರಿತು "ಕೆಲಸದ ವೇಳೆ ನಿದ್ದೆ, ಮಾಡುತ್ತೀರಾ, ನಿದ್ದೆ ಮಾಡುವಾಗ ಕೆಲಸ ಮಾಡುತ್ತೀರಾ" ಎಂದು ಲೇವಡಿ ಮಿಶ್ರಿತ ಟೀಕೆ ಮಾಡುತ್ತಾನೆ. ಈ ಚಿತ್ರಾ ನೋಡಿ
ಏನೋ .... ? ಮಾಡುವ ಜಾಗದಲ್ಲಿ, ಮತ್ತಿನ್ನೇನನೋ ಮಾಡುತ್ತಿರುವ ಈ ವ್ಯಕ್ತಿಯ ಬಗ್ಗೆ ಏನ್ ಹೇಳಬೇಕೋ ನೀವೆ ತೀಮಾನಿಸಿ.